ನಲವತ್ತು ದಾಟಿದ ಮೇಲೆ ಶ್ರೀಯ ಮುಖದ ಮೇಲೆ, ಗಲ್ಲ ಮತ್ತು ಹಣೆಯ ನಡುವಿನ ಜಾಗದಲ್ಲಿ ಕಪ್ಪು ಛಾಯೆ ಗಮನಿಸಿದ ಅಪ್ಪಿ, ಅವನಿಗೆ ದಿನವೂ ಸಂಜೆ ಹತ್ತಿರವಿರುವ park ಗೆ walking ಕರೆದುಕೊಂಡು ಹೋಗಲು ಪ್ರಾರಂಭಿಸಿ ಇವತ್ತಿಗೆ ಸರಿಸುಮಾರು ಅರ್ಧ ವರ್ಷವಾಗಿದೆ . ಶ್ರೀ ಹೆಂಡತಿ ಶಾರದಾಗೆ ಅಪ್ಪಿ ಹಲವು ಸಲಹೆಗಳನ್ನಿತ್ತು, ಅವನಿಗೆ diabetic ಬರುವ ಎಚ್ಚರಿಕೆ ಕೊಟ್ಟು ಅಡುಗೆಯಲ್ಲಿ ಏನು ಮಾರ್ಪಾಡು ಮಾಡಿದರೆ ಒಳ್ಳೆಯದು, ಸೋಂಬೇರಿ ಶ್ರೀ ನೀರು ಕುಡಿಯುವುದನ್ನ ಹೆಚ್ಚಿಗೆ ಮಾಡಲು ಮನೆಯಲ್ಲಿ ಶಾರದಾ, ಆಫೀಸ್ ಅಲ್ಲಿ ಅಪ್ಪಿ ಎಡಬಿಡದೆ ಒದ್ದಾಡಿದ್ದು ಅವರಿಬ್ಬರಿಗೆ ಮಾತ್ರ ಗೊತ್ತು.
ಆರು ತಿಂಗಳವಾಯಿತು ಅಪ್ಪಿ ಒಂದೂ ದಿನ ತಪ್ಪಿಸದೇ ಆರು ಘಂಟೆಗೆ ಬಂದು ಶ್ರೀಯ ಎಲ್ಲಾ ನಾಟಕ ನಖರಾ ಸಹಿಸಿಕೊಂಡು ವಾಕಿಂಗ್ ಗೆ ಕರೆದೊಯ್ಯುತ್ತಾನೆ. ಪಾರ್ಕ್ ನಲ್ಲಿ ಅರ್ಧ ತಾಸು ಮೆಲ್ಲಗೆ ನಡೆಯುತ್ತಾ, ಇನ್ನೊಂದು ಘಂಟಿ ಅವರಿವರನ್ನ ಮಾತನಾಡಿಸಿಕೊಂಡು, ಉಪದೇಶಿಸಿ , ತನ್ನನ್ನು ತಾನೇ ಹೊಗಳುತ್ತಾ ಕೂರುವುದು ಶ್ರೀಯ ದಿನಚರಿ.
ಇಂದು ಅರ್ಧ ಘಂಟೆ ನಡೆದಾಡಿದ ಮೇಲೆ, ಅಲ್ಲೇ ಹುಲ್ಲು ಹಾಸಿಗೆಯ ಮೇಲೆ ಕಾಲು ಚಾಚಿ, ಕೈಗಳನ್ನು ಬೆನ್ನ ಹಿಂದೆ ಊರಿ ಕುಳಿತ ಶ್ರೀಗೆ ಮುಸ್ತಾಫಾ ಕೂಡ ವಾಕ್ ಮಾಡುತ್ತಿರೋದು ಕಾಣಿಸಿತು.
"ಮುಸ್ತಪ್ಪ, ಏನು ಈ ಕಡೆ ? ವಾಕ್ ಮಾಡಲು ಬಂದಿರುವ ಹಾಗಿದೆ, ಇವನ್ಯಾರೋ ಜೊತೆಯಲ್ಲಿ?".
"ಶ್ರೀ ಬಯ್ಯಾ, ಇವ ನನ್ನ ಮಗ ರಹಮತ್. ಪಾರ್ಕ್ ಗೆ ವಾಕ್ ಮಾಡಲು ಬರದೇ ಎಂತ ಅಜ್ಜಿಯ ಕೂದಲು ಹುಡುಕಲು ಬರುತ್ತಾರೆಯೇ?".
"ಮುಸ್ತಪ್ಪ, ಯಾಕೋ ಗಲಿಬಿಲಿ ಅಲ್ಲಿ ಇದ್ದಹಾಗಿದೆ. ಆರಾಮಾಗಿ ಒಂದೆರೆಡು ರೌಂಡ್ ವಾಕ್ ಮಾಡಿ ಬಾ, ಮಾತನಾಡುವ."
"ಗಲಿಬಿಲಿ ಎಂತ ಇಲ್ಲ ಮಾರಾಯ.ಇವನದ್ದು ಒಂದೇ ಪಿರಿಪಿರಿ. ಮದುವೆಯಾಗಿ ಒಂದು ವರ್ಷವಾದರೂ ಇನ್ನೂ ತೊಟ್ಟಿಲು ತೂಗಲಾಗಲಿಲ್ಲ ಇವನಿಗೆ.ಕೇಳಿದರೆ ಇನ್ನೂ ಮೂರು ನಾಲ್ಕು ವರ್ಷದವರೆಗೂ ಮಗು ಬೇಡವಂತೆ, ಇದಕ್ಕೇನು ಹೇಳುತ್ತೀಯಾ ".
"ಓಹೋ, ಹಾಗೇನು, ಈಗಿನ ಕಾಲದ ಹುಡುಗರು ತುಂಬ ಹುಷಾರು, ನಾನು ಅವನ ಜೊತೆ ಮಾತನಾಡಬಹುದೇ? ಹೌದಾದರೆ, ನೀನು ವಾಕ್ ಮುಗಿಸಿ ಬಾ, ಅಷ್ಟರೊಳಗೆ ನಾನು ಇವನ ಜೊತೆ ಉಭಯ ಪರಿಚಯ ಮಾಡಿಕೊಳ್ಳುತ್ತೇನೆ".
"ಅದು ಆದೀತು, ನಿನ್ನ ಮಾತು ಕೇಳಿ ಇವನ ಮನ ಪರಿವರ್ತನೆ ಆಗುವುದಾದರೆ ಅಡ್ಡಿಯಿಲ್ಲ."
"ಪ್ರಯತ್ನ ಮಾಡುತ್ತೇನೆ, ನೀನು ಮೂಗು ತೂರಿಸದಿದ್ದರೆ ಅದೇ ದೊಡ್ಡ ಉಪಕಾರ".
"ಇನ್ಷಾ ಅಲ್ಲಾಹ " ಎಂದು ಮುಸ್ತಫಾ ರೆಹಮಾನ ಅನ್ನು ಶ್ರೀ ಹಾಗೂ ಅಪ್ಪಿ, ಬ್ಯಾಂಕ್ ಅಲ್ಲಿ ನೌಕರರು ಮತ್ತು ಲೋಕ ತಿಳಿದವರು ಇಂದು ಅವನ ಭಾಷೆಯಲ್ಲಿ ಹೇಳಿ ಅವರ ಜೊತೆ ಸಮಾಲೋಚಿಸುವಂತೆ ಆಜ್ಞೆ ಮಾಡಿ walking ಶುರು ಮಾಡಿದ.
"ರೆಹಮಾನ್, ಏನು ಮಾಡ್ಕೊಂಡಿದಿಯ, ಹೆಂಡತಿ ಸೌಖ್ಯವೇ ?".
"Hi uncle, ನಾನು Tech ಮಹೀಂದ್ರ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದೇನೆ. ಹೆಂಡತಿ ಕೂಡ TCS ಅಲ್ಲಿ software engineer. ಎಲ್ಲಾ ಆರಾಮು uncle".
" ಏನಾದರೂ ತೊಡಕಿದೆಯ? ಯಾಕೆ ನಿನಗೆ ಅಥವಾ ಅವಳಿಗೆ ಮಗುವಾಗುವುದು ಇಷ್ಟವಿಲ್ಲವಾ ?".
" ಅಯ್ಯೋ uncle, ನನಗೆ ಮತ್ತೆ ಅವಳಿಗೆ ಮಕ್ಕಳೆಂದರೆ ಬಲು ಪ್ರೀತಿ. ಆದರೆ ನಮ್ಮ ಸ್ನೇಹಿತರು ಮಕ್ಕಳ fees ಬಗ್ಗೆ ಕೇಳಿ ನಮಗೆ ಸ್ವಲ್ಪ ಹೆದರಿಕೆ ಇದೆ ಹಾಗಾಗಿ ಸ್ವಲ್ಪ ಹಿಂಜರಿಯುತ್ತಿದ್ದೇವೆ ಅಷ್ಟೇ."
"ಓಹ್ ಅಷ್ಟೇನಾ, ನಿನ್ನ ಮಗುವಿನ ಸ್ಕೂಲ್ ಫೀಸ್ free ಆದರೆ ನಿನಗೆ ಸಾಕಲ್ಲವೇ ಹಾಗಿದ್ದರೆ ?".
"ನೀವು ಅಬ್ಬು ಗೆ fee ಪಾವತಿಸಲು ಹೇಳುತ್ತಿರೇನೋ, ಆದರೆ ನಮಗೆ ಅದು ಸ್ವಲ್ಪವೂ ಇಷ್ಟವಾಗದ ಸಂಗತಿ, ಅದಲ್ಲದೆ ಒಂದೆರೆಡು ವರ್ಷ ಅವರು ಪಾವತಿಸಬಹುದೇನೋ, ಅದಾದಮೇಲೆ ನಾವಲ್ಲವೇ ನೋಡಬೇಕು ?".
"ನಾನು ಬ್ಯಾಂಕ್ ಅಲ್ಲಿ ಮ್ಯಾನೇಜರ್, ನನಗೆ ಅದಕ್ಕಿಂತ ಒಳ್ಳೆಯ ಸಲಹೆ ಗೊತ್ತು ಮಾರಾಯ, ನೀನು ಹೇಳು fees ಮಾತ್ರವೇ ನಿನ್ನ ಸಮಸ್ಯೆ ಅಲ್ಲವಾ?".
"ಹೌದು ಶ್ರೀ uncle, ಈಗ ಸದ್ಯಕ್ಕೆ ಅದೇ ದೊಡ್ಡ ಸಮಸ್ಯೆ ನಮಗೆ".
" ಹಾಗಾದರೆ ಶ್ರೀಗೆ ಇದು ಸರಳ ತುತ್ತು" ಎಂದು ಶ್ರೀ ಪಕ್ಕದಲ್ಲೇ ಕೂತ ಅಪ್ಪಿ, ರೆಹಮಾನ್ ಗೆ ಕೂರುವಂತೆ ಸಲಹೆ ನೀಡಿದ.
"ನೋಡು, ಈಗ ನೀವು ಸ್ವಲ್ಪ ಮುನ್ನೆಚ್ಚರಿಕೆ ವಹಿಸಿ ಸರಿಯಾಗಿ ಯೋಜನೆ ಮಾಡಿದರೆ ನಿನ್ನ ಮಗುವಿನ ಸ್ಕೂಲ್ ಫೀಸ್ free ಆದೀತು, ಅದಕ್ಕೆ ನನ್ನ ಬಳಿ ಸರಳವಾದ ಯೋಜನೆ ಇದೆ, ಇದರಲ್ಲಿ ನಿನ್ನ ತಲೆ ಕೆಡಿಸಿಕೊಳ್ಳುವಂಥದ್ದು ಏನೂ ಇಲ್ಲ."
"ಸರಿ uncle, ಹೇಳಿ. "
"ಈಗಿನ ಆರ್ಥಿಕ ವ್ಯವಸ್ಥೆಯಲ್ಲಿ ಸರಿಸುಮಾರು ಒಂದೂ ವರೆ ಎರೆಡು ಲಕ್ಷದವರೆಗೂ ವಾರ್ಷಿಕ fees ಇದೆ ಬೆಂಗಳೂರಲ್ಲಿ ಪ್ರತಿ ವರ್ಷಕ್ಕೆ. ಹೌದಲ್ಲವೇ?".
"ಹಾ uncle, ನನ್ನ ಗೆಳೆಯರ ಪ್ರಕಾರ ಹೆಚ್ಚು ಕಡಿಮೆ ಅಷ್ಟೇ ಆಗುತ್ತದೆ."
" ಹಾಗಾದರೆ ಕೇಳಿಸಿಕೊ, ನಿನಗೆ ಸುಮಾರು ಐದರಿಂದ ಆರು ವರ್ಷದ ಸಮಯ ಇದೆ, ಅದು ತುಂಬಾ ಒಳ್ಳೆಯದು ಕೂಡ".
"ಅರ್ಥವಾಗಲಿಲ್ಲ uncle".
"ನೋಡು ಈಗ ನಿನಗೆ ಒಂದು ವರ್ಷವಾದರೂ ಬೇಕಲ್ಲವೇ ಮಗುವಾಗಲು ".
" ಹೌದು, ಆದರೆ ನಮ್ಮ ಪ್ಲಾನ್ ಇರೋದು ಇನ್ನೂ ಮೂರು ವರ್ಷ ಕಾಯೋಣ ಅಂತ".
" ಅಲ್ಲಿಗೇ ಬರುತ್ತಿದ್ದೇನೆ ಮಾರಾಯ, ಸ್ವಲ್ಪ ತಾಳ್ಮೆ. ನಿನಗೆ ವರ್ಷದಲ್ಲಿ ಹೆಚ್ಚು ಕಮ್ಮಿ 3-4 ಲಕ್ಷದವರೆಗೂ ಉಳಿತಾಯ ಮಾಡಬಹುದಲ್ಲವೇ ಇಬ್ಬರೂ ಸೇರಿ?"
"ಹಾಂ ಅಂಕಲ್, ಸ್ವಲ್ಪ ಪ್ರಯತ್ನ ಪಟ್ಟರೆ ಆದೀತು, ಯಾಕೆ uncle?" .
"ಮೊದಲ ವರ್ಷ 4 ಲಕ್ಷ fixed deposit ಇಟ್ಟರೆ ಆಯಿತು, ದೇವರ ಆಶೀರ್ವಾದವಿದ್ದರೆ ಅಷ್ಟರೊಳಗೆ ನಿನ್ನಪ್ಪ ಆಶಿಸಿದಂತೆ ನಿಮ್ಮ ಮನೆಯಲ್ಲಿ ತೊಟ್ಟಿಲು ತೂಗುವಂತಾದರೆ....".
"ಆದರೆ uncle, ಈ 4 ಲಕ್ಷ ಬರೀ ಎರೆಡು ವರ್ಷಕ್ಕಾದೀತು ಅಲ್ಲವೇ ?".
" ರಹಮತ್ ಗೆ ತಾಳ್ಮೆ ಕಮ್ಮಿ ಅನ್ನಿಸುತ್ತೆ. ಅದರ ಮರುವರ್ಷ ಅದರ ಬಡ್ಡಿ ಹಾಗೂ ನಿನ್ನ ಆ ವರ್ಷದ ಉಳಿತಾಯ 4 ಲಕ್ಷ".
"ಇದು ಚೆನ್ನಾಗಿದೆ ಆದರೆ uncle ".
"ತಡಕೋ ಪಾ, ಮಗು ದೊಡ್ಡವನಾಗಿ ಐದು ವರ್ಷವಾಗಿ ಶಾಲೆಗೆ ಹೋಗುವಷ್ಟರಲ್ಲಿ , ಪ್ರತಿ ವರ್ಷದ ಬಡ್ಡಿ ಹಾಗೂ ಆ ವರ್ಷದ ಅಸಲು 4-5 ಲಕ್ಷ ಸೇರಿಸಿ ಸರಿ ಸುಮಾರು 28-30 ಲಕ್ಷವಾಗಿರುತ್ತೆ ".
"Uncle, ಆದರೆ .... ".
"ಇನ್ನೂ ಮುಗಿದಿಲ್ಲ, ಹಾಗೆ ಕೂಡಿಕರಿಸಿದ ಒಟ್ಟು ಮೊತ್ತವನ್ನ ಅಸಲಿಟ್ಟು ಕೊಂಡು fixed deposit ತೆಗೆದರೆ ಮಾತ್ರ ಸಾಕು, ಪ್ರತೀ ವರ್ಷ ಅವನ ಸ್ಕೂಲ್ ಫೀಸ್ cover ಆಗುತ್ತೆ ".
" ಆದರೆ ಶ್ರೀ uncle .... ".
" ಇನ್ನೂ ಬಾಕಿ ಇದೆ, ವರ್ಷದ ಬಡ್ಡಿಯಲ್ಲಿ ನಿನ್ನ ಮಗುವಿನ ಸ್ಕೂಲ್ ಪಾವತಿಸಿ ಉಳಿಯುವ ಅಲ್ಪ ಸ್ವಲ್ಪ ಮೊತ್ತವನ್ನೂ ಕೂಡ ನೀನು ಆ FD ಗೆ ಮರುಪಾವತಿಸಿದರೆ ಈ ಹಣದುಬ್ಬರದ ಪರಿಣಾಮ ಸ್ವಲ್ಪ ಕಮ್ಮಿ ಆಗಬಹುದು. ಹೀಗೆ ಶಾಲೆ ಎಲ್ಲಾ ಮುಗಿಸಿ ಬಂದ ನಿನ್ನ ಮಗನಿಗೆ ಕಾಲೇಜ್ ಬಂದಾಗ education loan ಮಾಡಿಕೊಡು. ಆದರೆ FD ಮುರಿಯಬೇಡ. ಅವನ ಕಾಲೇಜ್ ಮುಗಿಸುವಷ್ಟರಲ್ಲಿ ಅದರ ಬಡ್ಡಿ, ಚಕ್ರ ಬಡ್ಡಿ ಎಲ್ಲ ಸೇರಿ ಒಟ್ಟೂ ಮೊತ್ತವನ್ನು ಆ loan ಗೆ ಬಳಸು, ಅವನ ಹೊರೆ ಕಮ್ಮಿ ಮಾಡು".
"ಆದರೆ uncle, ನಿಮ್ಮ ಯೋಜನೆ ಸರಿಯಾಗಿದೆ. ನಾವು ಬ್ಯಾಂಕ್ ಅಲ್ಲಿ ಹಣ ಪಾವತಿಸಲು, ಅದರ ಬಡ್ಡಿ ಉಪಯೋಗಿಸಲು ಅಪ್ಪನಿಗೆ ಕೊಂಚವೂ ಇಷ್ಟವಿಲ್ಲ, ಅದು ಅವರ ಆಚಾರದ ವಿರುದ್ಧ".
"ಹಾಗಾದರೆ ನನ್ನ ಬಳಿ ಇನ್ನೊಂದು ಉಪಾಯವಿದೆ, ಮುಸ್ತಪ್ಪ ಬರಲಿ ಅವನಿದ್ದಾಗ ಹೇಳಿದರೆ ಸರಿಯಾದೀತು."
"ಶಾರದಾ ಮತ್ತೇ ನೀಲಾ, ಬಹುಶಃ ಕಾಯುತ್ತಿರಬಹುದು ನಮಗೋಸ್ಕರ, ಅವರಿಗೆ ಪೇಟೆಗೆ ಹೋಗುವುದಿತ್ತು, ಹೊರಡೋಣವೆ?" ಅಪ್ಪಿ ಸ್ವಲ್ಪ ಜೋರು ಧ್ವನಿಯಲ್ಲಿ ಕೇಳಿದ ಶ್ರೀಗೆ.
"ಹೌದಾ, ಹಾಗಾದರೆ ಹೊರಡೋಣ ಮಾರಾಯ, ಚೂರು ಚಹಾ ಕುಡಿಯೋಣವಾ ?".
"ಅದೆಲ್ಲ ಬೇಡ, ಇವತ್ತು ಬರೀ ಹರಟೆ ಆಯಿತು, ಅಷ್ಟೊಂದು ವಾಕ್ ಕೂಡ ಮಾಡಿಲ್ಲ."
"ನಿನ್ನಂಥ ಒಬ್ಬ ಗೆಳೆಯನಿದ್ದರೆ ಶತ್ರುಗಳೇ ಬೇಡ ಮಾರಾಯ, ಛೇ ".
"Thanks uncle, ನಾನು ಅಪ್ಪನ ಹತ್ತಿರ ಈ ಪ್ರಸ್ತಾಪವನ್ನಿಡುತ್ತೇನೆ, ನೋಡುವ." ಅಂತ ಹೇಳಿ ರಹಮತ್ ಬೀಳ್ಕೊಟ್ಟ.
ಅವನು ಹೋಗುತ್ತಲೇ ಅಪ್ಪಿ ಶ್ರೀ ಗೆ "ಹೌದು , ನೀನೂ ಇದನ್ನೇ ಮಾಡಿದ್ಯಾ ".
"ಹೇಳುವುದಕ್ಕೂ, ಕೇಳುವುದಕ್ಕೂ ಇದು ಸಮಯವಲ್ಲ, ನೀನು ಚಾ ಕುಡಿಸುವರೆಗೂ ".
"ಶಕ್ಯವೇ ಇಲ್ಲ, ನನಗೆ ಶಾರದಾ ಅತ್ತಿಗೆಯನ್ನು ಕಾಯಿಸುವುದು ಇಷ್ಟವಿಲ್ಲ.ಬೇಗ ಹೊರಡುವ ಬಾ".
######### ಶುಭಂ ##########
ಇಂತಿ,
ಶ್ರೀ ಅಪ್ಪಿ.
